Jala sankalpa campaign in Chikkaballapur:- ಚಿಕ್ಕಬಳ್ಳಾಪುರಕ್ಕೆ ಜಲ ಸಮೃದ್ಧಿಯ ಕೊಡುಗೆ: ‘ಜಲಸಂಕಲ್ಪ’ ಲೋಗೋ ಬಿಡುಗಡೆ ಮಾಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಜೈ ಫೌಂಡೇಶನ್ ಜಯಕುಮಾರ್!

ಚಿಕ್ಕಬಳ್ಳಾಪುರ: ಹುಟ್ಟುಹಬ್ಬ ಅಂದ ತಕ್ಷಣ ಕೇಕ್ ಕತ್ತರಿಸುವುದು, ಪಾರ್ಟಿ ಮಾಡುವುದು ಸಾಮಾನ್ಯ. ಆದರೆ, ಸದಾ ಸಮಾಜಮುಖಿ ಚಿಂತನೆ ನಡೆಸುವ ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಜಯಕುಮಾರ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಜಿಲ್ಲೆಯ ಭವಿಷ್ಯಕ್ಕೆ ನೆರವಾಗುವ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಬರಪೀಡಿತ ಬಯಲುಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕೆರೆಗಳ ಪುನಶ್ಚೇತನ ಹಾಗೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ತಮ್ಮ ಜನ್ಮದಿನದಂದೇ ಅವರು ‘ಜಲಸಂಕಲ್ಪ ಅಭಿಯಾನ’ದ (Jala sankalpa campaign) ಲೋಗೋ ಬಿಡುಗಡೆ ಮಾಡಿ ಜಲ ಜಾಗೃತಿ ಮೂಡಿಸಿದ್ದಾರೆ.

ಏನಿದು ಜಲಸಂಕಲ್ಪ ಅಭಿಯಾನ? ಸಾರ್ವಜನಿಕರಿಗೆ ಜಯಕುಮಾರ್ ಕರೆ:

ನಗರದ ಎಂ.ಜಿ. ರಸ್ತೆಯಲ್ಲಿರುವ ಡಿವೈನ್ ಸಿಟಿಯ ಜೈ ಫೌಂಡೇಶನ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಕುಮಾರ್ ಅವರು, “ರಾಜಧಾನಿ ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಜನತೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಯೋಚಿಸಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. ಜಿಲ್ಲೆಯ ಕೆರೆಗಳ ಪುನಶ್ಚೇತನ ಹಾಗೂ ಜಲ ಸಮೃದ್ಧಿಗಾಗಿ ಆರಂಭಿಸಿರುವ ಈ ಬೃಹತ್ ಜಲಸಂಕಲ್ಪ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನನ್ನೊಂದಿಗೆ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.

“ಪ್ರತಿ ವರ್ಷವೂ ವಿಭಿನ್ನ ಸೇವಾ ಯೋಜನೆಗಳ ಮೂಲಕವೇ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾ ಬಂದಿದ್ದೇನೆ. ಈ ವರ್ಷ ನಮ್ಮ ನೆಲದ ಜಲದ ಉಳಿವಿಗಾಗಿ ‘ಜಲಸಂಕಲ್ಪ’ ಲೋಗೋ ಬಿಡುಗಡೆ ಮಾಡಿರುವುದು ನನಗೆ ಇನ್ನಿಲ್ಲದ ತೃಪ್ತಿ ತಂದಿದೆ.” – ಜಯಕುಮಾರ್, ಸಂಸ್ಥಾಪಕ ಅಧ್ಯಕ್ಷರು, ಜೈ ಫೌಂಡೇಶನ್.

ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ – ವೃದ್ಧಾಶ್ರಮದಲ್ಲಿ ಆಶೀರ್ವಾದ:

ಜಯಕುಮಾರ್ ಅವರು ತಮ್ಮ ಹುಟ್ಟುಹಬ್ಬದ ದಿನದ ಆರಂಭವನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆರಂಭಿಸಿದರು. ಬೆಳಗ್ಗೆಯೇ ತಾಲ್ಲೂಕಿನ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು. ಅಲ್ಲಿಂದ ವಿವಿಧ ಚರ್ಚ್ ಹಾಗೂ ಮಸೀದಿಗಳಿಗೂ ಭೇಟಿ ನೀಡಿ ಸರ್ವಧರ್ಮ ಸಮನ್ವಯತೆಯ ಪ್ರಾರ್ಥನೆ ಸಲ್ಲಿಸಿದರು. ನಂತರ ತಾಲ್ಲೂಕಿನ ರಂಗಸ್ಥಳದಲ್ಲಿರುವ ಮಾನಸ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ಹಿರಿಯರ ಆಶೀರ್ವಾದ ಪಡೆದರು.

ಪಕ್ಷಾತೀತವಾಗಿ ಹರಿದುಬಂದ ಹಿತೈಷಿಗಳ ಸಾಗರ:

ಜಯಕುಮಾರ್ ಅವರ ಈ ಸಮಾಜಮುಖಿ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಿತೈಷಿಗಳು ಪಕ್ಷಾತೀತವಾಗಿ ಬಂದು ಶುಭ ಹಾರೈಸಿದರು.

ಚಿಕ್ಕಬಳ್ಳಾಪುರದ ಪ್ರಮುಖ ನಾಯಕರಾದ ರಾಮಕುಮಾರ್, ಮಹಾಕಾಳಿ ಬಾಬು, ಬಾಬಾ ಜಾನ್, ನಂದಿ ಎಮ್ ಬಾಷಾ, ಅನಿಲ್, ಹಾಗೂ ಜೈ ಫೌಂಡೇಶನ್ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಬಾರಕ್ ಸೇರಿದಂತೆ ನೂರಾರು ಅಭಿಮಾನಿಗಳು ಜಯಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ, ಬೃಹತ್ ಹೂವಿನ ಹಾರ ಹಾಕಿ ಅತ್ಯಂತ ವೈಭವದಿಂದ ಸನ್ಮಾನಿಸಿ ಸಂಭ್ರಮಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles