ಚಿಕ್ಕಬಳ್ಳಾಪುರ: (Chikkaballapur crime):ಮದುವೆಯಾಗಿ ಇನ್ನೂ ಐದು ತಿಂಗಳು ಕಳೆದಿಲ್ಲ, ಅಷ್ಟರಲ್ಲೇ ಹೊಸ ಬಾಳಿನ ಕನಸು ಕಂಡಿದ್ದ ಯುವತಿಯೊಬ್ಬಳು ಹೆಣವಾಗಿ ಪತ್ತೆಯಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapur crime news) ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದ ಈ ಘಟನೆ ಈಗ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಅನುಮಾನದ ಸುಳಿಯಲ್ಲಿ ಈ ಸಾವು ಸಿಲುಕಿದೆ.

ಏನಿದು ಘಟನೆ?
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ನಿವಾಸಿಯಾದ ರೂಪಾ (30) (Roopa) ಎಂಬುವವರಿಗೂ, ಮುನಿರಾಜು (Muniraju) ಎಂಬುವವರಿಗೂ ಕೇವಲ 5 ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ಮದುವೆಯಾಗಿತ್ತು. ಆದರೆ, ಈಗ ರೂಪಾ (Roopa) ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮದುವೆಯಾದ ಹೊಸತರಲ್ಲಿ ಸಂಭ್ರಮದಿಂದ ಇರಬೇಕಾದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಗಂಡನ ಮೇಲೆ ಸಂಶಯದ ಮುಳ್ಳು!
ಸ್ಥಳೀಯ ಮೂಲಗಳ ಪ್ರಕಾರ, ಪತಿ ಮುನಿರಾಜು ಪತ್ನಿಯ ನಡತೆಯ ಮೇಲೆ ಪದೇ ಪದೇ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದೇ ‘ಅನುಮಾನದ ಭೂತ’ ರೂಪಾ ಪಾಲಿಗೆ ಮೃತ್ಯುವಾಗಿ ಬಂದಿತೇ? ಎಂಬ ಶಂಕೆ ವ್ಯಕ್ತವಾಗಿದೆ. ಗಂಡನ ಕಿರುಕುಳ ತಾಳಲಾರದೆ ರೂಪಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದ್ದರೂ, ರೂಪಾ ಪೋಷಕರು ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ.
‘ಇದು ಆತ್ಮಹತ್ಯೆಯಲ್ಲ, ಪಕ್ಕಾ ಕೊಲೆ’: ಪೋಷಕರ ಆಕ್ರೋಶ (Not suicide, its murder)
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರೂಪಾ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇದು ಆತ್ಮಹತ್ಯೆಯಲ್ಲ, ಬದಲಾಗಿ ಪತಿ ಮುನಿರಾಜುನೇ ಕೊಲೆ (Murder) ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
-
ಆಸ್ಪತ್ರೆಯ ಬಳಿ ಹೈಡ್ರಾಮಾ: ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ (Chikkaballapur Dist. Hospital) ಶವಾಗಾರದ ಮುಂದೆ ಜಮಾಯಿಸಿದ ರೂಪಾ ಸಂಬಂಧಿಕರು, ಮುನಿರಾಜು ತಾಯಿಯನ್ನು ಕಂಡು ಆಕ್ರೋಶ ಹೊರಹಾಕಿದ್ದಾರೆ. ಮಗಳ ಸಾವಿಗೆ ನೀವೇ ಕಾರಣ ಎಂದು ಹಿಡಿಶಾಪ ಹಾಕಿದ ದೃಶ್ಯ ಮನಕಲಕುವಂತಿತ್ತು.

ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ
ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Chikkaballapur Rural Police station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
-
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
-
ವರದಿ ಬಂದ ನಂತರವಷ್ಟೇ ಇದು ನೇಣು ಬಿಗಿದುಕೊಂಡು ಮಾಡಿಕೊಂಡ ಆತ್ಮಹತ್ಯೆಯೋ ಅಥವಾ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಲಾಗಿದೆಯೇ ಎಂಬ ಸತ್ಯ ತಿಳಿಯಲಿದೆ.






