ಆಗಸ್ಟ್ ತಿಂಗಳು ಬಂತೆಂದರೆ ಸಾಕು, ನಮ್ಮೆಲ್ಲರ ಮನಸ್ಸಿನಲ್ಲಿ ಸ್ವಾತಂತ್ರ್ಯದ ನೆನಪುಗಳು (Independence day) ಮರುಕಳಿಸುತ್ತವೆ. ಇದು ಕೇವಲ ಒಂದು ಕ್ಯಾಲೆಂಡರ್ ದಿನವಲ್ಲ, ಬದಲಿಗೆ ನಮ್ಮೆಲ್ಲರ ನಿಜವಾದ ಮಹತ್ವದ ಹಬ್ಬ. ಇಂತಹ ಸುಂದರವಾದ ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ದೊಡ್ಡ ಪುಣ್ಯವೇ ಸರಿ!
ಮಹಾನ್ ವ್ಯಕ್ತಿಗಳ ತ್ಯಾಗ ಮತ್ತು ದೇಶಭಕ್ತಿ
ನಮ್ಮ ದೇಶಕ್ಕಾಗಿ ಮಹಾನ್ ವ್ಯಕ್ತಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ನಡೆಸಿದ ಹೋರಾಟ, ಅಪಾರ ತ್ಯಾಗ ಮತ್ತು ನಿಸ್ವಾರ್ಥ ದೇಶಭಕ್ತಿಯನ್ನು ನಾವೆಂದಿಗೂ ಮರೆಯುವಂತಿಲ್ಲ. ತನು, ಮನ, ಧನವನ್ನೆಲ್ಲಾ ಸಮರ್ಪಿಸಿ, ಬಲಿದಾನಗಳನ್ನು ನೀಡಿ ನಮಗೆ ಈ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅಂತಹ ಪುಣ್ಯಭೂಮಿಗೆ ನಾವೆಲ್ಲರೂ ಸದಾ ನಿಷ್ಠೆಯಿಂದ ಉತ್ತಮ ದೇಶಪ್ರೇಮಿಗಳಾಗಿ ಇರೋಣ.
ಯುವ ಜನತೆಗೆ ಒಂದು ಸುಂದರ ಸಂದೇಶ
ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಉತ್ತಮ ವಿದ್ಯಾಂತರಾಗಿ ರೂಪುಗೊಳ್ಳಬೇಕು. ನಮ್ಮ ಕುಟುಂಬಕ್ಕೆ, ನಮ್ಮ ಸಮಾಜಕ್ಕೆ ಮತ್ತು ನಮ್ಮ ದೇಶಕ್ಕೆ ಒಳಿತನ್ನು ಬಯಸುವ ಒಳ್ಳೆಯ ವ್ಯಕ್ತಿಗಳಾಗೋಣ. ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.
-
ಉದ್ಯೋಗ ಮತ್ತು ಕೌಶಲ್ಯ: ಸೋಮಾರಿಗಳಾಗದೆ, ತಮ್ಮ ಆಸಕ್ತಿಗೆ ತಕ್ಕಂತೆ ಮತ್ತು ತಮಗೆ ಅನುಗುಣವಾಗುವ ಉದ್ಯೋಗದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿ.
-
ಸಕಾರಾತ್ಮಕ ಚಿಂತನೆ: ಯಾವುದೇ ದುಡುಕಿನ ನಿರ್ಧಾರಗಳಿಂದ ಕೆಟ್ಟ ಪರಿಸ್ಥಿತಿಗಳನ್ನು ತಂದುಕೊಳ್ಳಬೇಡಿ. ಒಂದು ಸುಂದರವಾದ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು.
-
ಒಳಿತನ್ನು ಮಾಡಿ: ಸದಾ ಒಳ್ಳೆಯದನ್ನೇ ಮಾಡಿ, ಒಳ್ಳೆಯದನ್ನೇ ಬಯಸಿ. ಆಗ ಮಾತ್ರ ನಮ್ಮ ಇಂದಿನ ಮತ್ತು ಮುಂದಿನ ಜೀವನವು ಅತ್ಯಂತ ಸುಂದರವಾಗಿರುತ್ತದೆ.
“ಒಳ್ಳೆಯತನದಿಂದ ಬದುಕು ಕಟ್ಟಿಕೊಂಡಾಗ ಮಾತ್ರ ದೇಶದ ಪ್ರಗತಿಯು ಸಾಧ್ಯ.”
ಲೇಖನ:- ಸೋ. ನಾ. ರೇಖಾ ಶ್ರೀನಿವಾಸ್







